ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ನಾಗವೃಜ ಕ್ಷೇತ್ರ ಪಾವಂಜೆ

Shri Jnanashakthi Subrahmanyaswami Temple, Nagavruja Kshetra Pavanje

ಕಾರ್ತಿಕ ದೀಪೋತ್ಸವ | 22.10.2025 ರಿಂದ 20.11.2025

ಶ್ರೀ ದೇವಳದಲ್ಲಿ ಕಾರ್ತಿಕ ಮಾಸ ಪರ್ಯಂತ ಸಂಜೆ ನಿತ್ಯ ರಂಗಪೂಜೆಯ ಬಳಿಕ ನಡೆಯುವ “ಕಾರ್ತಿಕ ದೀಪೋತ್ಸವ”ದ ಸಂಕ್ಷಿಪ್ತ ವಿವರಣೆ. ದೇಹೋ ದೇವಾಲಯ ಪ್ರೋಕ್ತೋ ಜೀವೋ ಹಂಸ: ಸದಾಶಿವ: | ತ್ಯಜೇತ್ ಅಜ್ಞಾನ ನಿರ್ಮಾಲ್ಯಂ ಸೋಹಂ ಭಾವೇನ ಪೂಜಯೇತ್ | ಇದು ಆತ್ಮ ಪರಮಾತ್ಮ ಅನುಸಂಧಾನೋಪಾಯ, ಸಾಧಕರಿಗೂ, ವಿದ್ವಾಂಸರಿಗೂ, ಜ್ಞಾನಿಗಳಿಗೂ ಸಾಧ್ಯವಾದ ಸ್ವರೂಪ ವಿಧಾನ. ಆದರೆ ಸಾಮಾನ್ಯರಿಗೂ ಪರಮಾತ್ಮ ಸಾನಿಧ್ಯ ಬೇಡವೇ? ಕೈವಲ್ಯ ಪ್ರಾಪ್ತಿಯ ಪ್ರಯತ್ನವಾದರೂ ಬೇಡವೇ? ಪ್ರಾಪಂಚಿಕ ಜೀವನದ ತೊಳಲಾಟ, ಡೊಂಬರಾಟದಿಂದ ಮುಕ್ತಿ ಬೇಡವೇ? ಜೀವನದ ಹೋರಾಟದಲ್ಲಿ …

ಕಾರ್ತಿಕ ದೀಪೋತ್ಸವ | 22.10.2025 ರಿಂದ 20.11.2025 Read More »

‘ಯಕ್ಷಾಂತರಂಗ’ ಶಿಬಿರಾರ್ಥಿಗಳಿಂದ ‘ಕಿರಾತಾರ್ಜುನ’ ಹಾಗೂ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ‘ಕರ್ಣಾರ್ಜುನ’ ಯಕ್ಷಗಾನ ಬಯಲಾಟ | 17.09.2025

ಕನ್ಯಾ ಸಂಕ್ರಮಣೋತ್ಸವದ ಪ್ರಯುಕ್ತ ‘ಯಕ್ಷಾಂತರಂಗ’ ಶಿಬಿರಾರ್ಥಿಗಳಿಂದ ಯಕ್ಷಗಾನ ಬಯಲಾಟ ‘ಕಿರಾತಾರ್ಜುನ’ ಹಾಗೂ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ‘ಕರ್ಣಾರ್ಜುನ’ ಪ್ರಸಂಗ ಪ್ರದರ್ಶನಗೊಂಡಿತು.

ನವರಾತ್ರಿ – ವಿಜಯ ದಶಮಿ | 22.09.2025 ರಿಂದ 02.10.2025

ಶ್ರೀ ದೇವಳದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ವಿಜಯ ದಶಮಿ ಪರ್ಯಂತ (22.09.2025 ರಿಂದ 02.10.2025) ಪ್ರತಿನಿತ್ಯ ಯಂತ್ರೋಪರಿ ಸ್ಥಾಪಿತ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿಯ ಆರಾಧನೆ, ಚಂಡಿಕಾ ಹೋಮ, ದುರ್ಗಾ ನಮಸ್ಕಾರ, ಇತ್ಯಾದಿ ಸೇವೆಗಳೊಂದಿಗೆ ಸಂಪನ್ನಗೊಂಡಿತು.

ಕನ್ಯಾ ಸಂಕ್ರಮಣೋತ್ಸವ | ಯಕ್ಷಗಾನ ಬಯಲಾಟ | 17.09.2025

ದಿನಾಂಕ 17.09.2025ರಂದು “ಕನ್ಯಾ ಸಂಕ್ರಮಣೋತ್ಸವ”ದ ಪ್ರಯುಕ್ತ ಮಧ್ಯಾಹ್ನ 4 ರಿಂದ ಶ್ರೀ ದೇವಳದ ಶಾರಧ್ವತ ಯಜ್ಞಾಂಗಣದಲ್ಲಿ ಯಕ್ಷಗಾನ ಬಯಲಾಟ. •ಸರ್ವರಿಗೂ ಆದರದ ಸ್ವಾಗತ•ಆಡಳಿತ ಮಂಡಳಿ

ಸಿಂಹ ಸಂಕ್ರಮಣೋತ್ಸವ | ಯಕ್ಷಗಾನ ಬಯಲಾಟ | 17.08.2025

ದಿನಾಂಕ 17.08.2025ರಂದು “ಸಿಂಹ ಸಂಕ್ರಮಣೋತ್ಸವ”ದ ಪ್ರಯುಕ್ತ ಮಧ್ಯಾಹ್ನ 4.30ರಿಂದ ಶ್ರೀ ದೇವಳದ ಶಾರಧ್ವತ ಯಜ್ಞಾಂಗಣದಲ್ಲಿ ಯಕ್ಷಗಾನ ಬಯಲಾಟ. •ಸರ್ವರಿಗೂ ಆದರದ ಸ್ವಾಗತ• ಆಡಳಿತ ಮಂಡಳಿ

ನಾಗರ ಪಂಚಮಿ | 29.07.2025

ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದ ಚಿತ್ರಕೂಟ ಪಂಚವಟಿ ಸಹಿತ ಕಂಬಳ ನಾಗ ಸನ್ನಿಧಿಯಲ್ಲಿ ನಾಗರ ಪಂಚಮಿಯು ಸಂಪನ್ನಗೊಂಡಿತು.

ಆಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ ತೈಲಾಭಿಷೇಕ ಮತ್ತು ಭಜನಾ ಸಂಕೀರ್ತನೆ | 26.07.2025

ಶ್ರೀ ಕ್ಷೇತ್ರದಲ್ಲಿರುವ ಆಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ 26.07.2025ರಂದು ಶ್ರಾವಣ ಶನಿವಾರದ ಪ್ರಯುಕ್ತ ಸೂರ್ಯೋದಯದಿಂದ ಸೂರ್ಯಾಸ್ತ ಪರ್ಯಂತ ನಿರಂತರ “ತೈಲಾಭಿಷೇಕ ಮತ್ತು ಭಜನಾ ಸಂಕೀರ್ತನೆ” ಜರಗಿತು.