ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ನಾಗವೃಜ ಕ್ಷೇತ್ರ ಪಾವಂಜೆ

Shri Jnanashakthi Subrahmanyaswami Temple, Nagavruja Kshetra Pavanje

News & Events

ಮಿಥುನ ಸಂಕ್ರಮಣೋತ್ಸವ | ಯಕ್ಷಗಾನ ತಾಳಮದ್ದಳೆ “ಮಯೂರಧ್ವಜ” – 15.06.2025

ದಿನಾಂಕ 15.06.2025ರಂದು “ಮಿಥುನ ಸಂಕ್ರಮಣೋತ್ಸವ”ದ ಪ್ರಯುಕ್ತ ಮಧ್ಯಾಹ್ನ 4.00ರಿಂದ ಶ್ರೀ ದೇವಳದ ಶಾರಧ್ವತ ಯಜ್ಞಾಂಗಣದಲ್ಲಿ ಯಕ್ಷಗಾನ ತಾಳಮದ್ದಳೆ “ಮಯೂರಧ್ವಜ”

ಪತ್ತನಾಜೆ – ಅಂಕುರಾರ್ಪಣೆ, ನಿರಂತರ ರುದ್ರಾಭಿಷೇಕ, ವರುಣ + ಪರ್ಜನ್ಯ ಆರಾಧನೆ.

ಶ್ರೀ ದೇವಳದಲ್ಲಿ 24.05.2025 ಪತ್ತನಾಜೆಯ ಪ್ರಯುಕ್ತ ಶ್ರೀ ಗೌತಮೇಶ್ವರನಿಗೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಿರಂತರ ರುದ್ರಾಭಿಷೇಕ, ವರುಣ+ಪರ್ಜನ್ಯ ಆರಾಧನೆ ಸಂಪನ್ನಗೊಂಡಿತು

ಅಗೇಲು ಸೇವೆ / Agelu Seve – 08.05.2025

ಅಗೇಲು ಸೇವೆ ಈ ವಿಶಿಷ್ಟ ಅಗೇಲು ಸೇವೆಯೆಂಬ ಶೈವಾಗಮೋಕ್ತ ತಂತ್ರೋಕ್ತ ಪೂಜಾ ವಿಧಿಯು ಶ್ರೀ ದೇವಳದಲ್ಲಿ ಮೇ 8ರಂದು ಮಧ್ಯಾಹ್ನ 4 ಗಂಟೆಯಿಂದ ನಡೆಯಲಿದೆ. ನಿರಂತರವಾಗಿ 1000 ತಂತ್ರೋಕ್ತ ರೀತ್ಯಾ ರಂಗಪೂಜೆ ನಡೆದ ದೇವಾಲಯದಲ್ಲಿ ಈ ಅಗೇಲು ಸೇವೆಯೆಂಬ ವಿಶೇಷ ಪ್ರಕ್ರಿಯೆಯನ್ನು ನಡೆಸಲು ಅವಕಾಶವಿರುತ್ತದೆ. ಅಂತೆಯೇ ನಮ್ಮೀ ದೇವಾಲಯದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ದಿನದಿಂದ ಇಂದಿನವರೆಗೂ ನಿರಂತರವಾಗಿ ರಂಗಪೂಜೆ ನಡೆಯುತ್ತಿದ್ದು (7300ಕ್ಕೂ ಮೇಲ್ಪಟ್ಟು) ಪ್ರತಿ ವರ್ಷ ವೈಶಾಖ ಶುದ್ಧ ಏಕಾದಶಿಯಂದು ಅಗೇಲು ಸೇವೆಯನ್ನು ಸಲ್ಲಿಸಲಾಗುತ್ತಿದೆ. ಮಹಾರಂಗಪೂಜೆಯ ವಿಸ್ತೃತ ರೂಪವಾಗಿ …

ಅಗೇಲು ಸೇವೆ / Agelu Seve – 08.05.2025 Read More »

ವಾರ್ಷಿಕ ಮಹೋತ್ಸವ – 13 ಏಪ್ರಿಲ್ ರಿಂದ 19 ಏಪ್ರಿಲ್ 2025ರವರೆಗೆ

ಶ್ರೀ ದೇವಳದಲ್ಲಿ ವಾರ್ಷಿಕ ಮಹೋತ್ಸವವು ದಿನಾಂಕ 13.04.2025ರಂದು ಅಂಕುರಾರ್ಪಣೆಯಿಂದ ಮೊದಲ್ಗೊಂಡು, 14ರಂದು ಧ್ವಜಾರೋಹಣ, 18 ರಂದು ಮಹಾ ರಥೋತ್ಸವ, 19ರಂದು ಅವಭೃತ ಸ್ನಾನ, ಧ್ವಜಾವರೋಹಣ, ಅಣ್ಣಪ್ಪ ಸ್ವಾಮಿಗೆ ನರ್ತನ ಸೇವೆಯೊಂದಿಗೆ ಸಂಪನ್ನಗೊಳ್ಳಲಿದೆ.

ರಾಮ ನವಮಿ – 06.04.2025

ಶ್ರೀ ದೇವಳದ ಆಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ 06.04.2025ರಂದು ಶ್ರೀ ರಾಮ ನವಮಿಯ ಪ್ರಯುಕ್ತ ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಶ್ರೀ ರಾಮ ತಾರಕ ಮಂತ್ರ ಹೋಮ ಹಾಗೂಬೆಳಿಗ್ಗೆ 10 ಗಂಟೆಗೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಮಕ್ಕಳ ಯಕ್ಷ ಬಳಗ, ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ “ಯಕ್ಷಾರಾಧನೆ – ಹನುಮದ್ವಿಲಾಸ” ಜರಗಿತು. ನಿರ್ದೇಶನ : ಹರಿರಾಜ್ ಶೆಟ್ಟಿಗಾರ್ ಕಿನ್ನಿಗೋಳಿಹಿಮ್ಮೇಳ : ಮನ್ವಿತ್ ಶೆಟ್ಟಿ ಇರಾ, ಗುರುಪ್ರಸಾದ್ ಬೋಳಿಂಜಡ್ಕ, ಪ್ರಶಾಂತ್ ಶೆಟ್ಟಿ ವಗೆನಾಡು

ಶ್ರೀ ಜ್ಞಾನಶಕ್ತಿ ಗೋಕುಲ | ನೂತನ ಸುಸಜ್ಜಿತ ಗೋಶಾಲೆ – Shri Jnanashakthi Gokula | Newly built Goshaale

ಶ್ರೀ ದೇವಳದ ಪ್ರಾಕಾರದಲ್ಲಿ ನೆಲೆ ನಿಂತಿರುವ ಶ್ರೀ ಗೋಪಾಲಕೃಷ್ಣ ಪಾಂಡುರಂಗಸ್ವಾಮಿಯ ಪ್ರತಿಷ್ಠಾ ವರ್ಧಂತಿಯ ಸಂದರ್ಭದಲ್ಲಿ ಶ್ರೀ ದೇವಳದಿಂದ ನಿರ್ವಹಿಸಲ್ಪಡುವ ಸುಮಾರು ಒಂದು ನೂರಕ್ಕೂ ಹೆಚ್ಚು ಗೋವುಗಳನ್ನು ಪಾಲನೆ ಮಾಡಬಹುದಾದಂತಹ ನೂತನ ಸುಸಜ್ಜಿತ ಗೋಶಾಲೆ “ಶ್ರೀ ಜ್ಞಾನಶಕ್ತಿ ಗೋಕುಲ” ವನ್ನು ಉದ್ಘಾಟಿಸಲಾಯಿತು.

ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ ಪೂಜೆ – 02.03.2025

ದಿನಾಂಕ 02.03.2025ರಂದು ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ ಪೂಜೆಯು ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದ ಶಾರಧ್ವತ ಯಜ್ಞಾಂಗಣದಲ್ಲಿ ಸಂಪನ್ನಗೊಂಡಿತು.