
ಶ್ರೀ ಗೋಪಾಲಕೃಷ್ಣ ಪಾಂಡುರಂಗಸ್ವಾಮಿಯ ಪ್ರತಿಷ್ಠಾ ವರ್ಧಂತ್ಯುತ್ಸವದ ಸಂದರ್ಭದಲ್ಲಿ
- ಶ್ರದ್ಧಾ ಭಕ್ತಿಯಿಂದ ತಾವೇ ಮಂಗಳಾರತಿ ಸೇವೆ ಮಾಡಲು ಭಕ್ತಾದಿಗಳಿಗೆ ಮುಕ್ತಾವಕಾಶ ಕಲ್ಪಿಸಲಾಗಿದೆ.
- ಈ ಸೇವೆ ಮಾಡಲು ಬೆಳಿಗ್ಗೆಯಿಂದ ಸಾಯಂಕಾಲದ ವರೆಗೆ (ಅಲಂಕಾರದ ಸಮಯ ಹೊರತುಪಡಿಸಿ) ಅವಕಾಶವಿರುತ್ತದೆ.
- ಈ ಸೇವೆಯಲ್ಲಿ ಭಾಗವಹಿಸುವ ಪುರುಷರಿಗೆ ಪಂಚೆ + ಶಾಲು ಮತ್ತು ಮಾತೆಯರಿಗೆ ಸೀರೆ / ಚೂಡಿದಾರ್ ಉಡುಗೆ ಕಡ್ಡಾಯ.
- ಮಂಗಳಾರತಿ ಸೇವಾ ಮೌಲ್ಯ ರೂ.200 ಶ್ರೀದೇವಳದ ಕಚೇರಿಯಲ್ಲಿ ಪಾವತಿಸುವುದು.
ಆಡಳಿತ ಮಂಡಳಿ.
ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ನಾಗವೃಜ ಕ್ಷೇತ್ರ ಪಾವಂಜೆ




