ನಾಗರ ಪಂಚಮಿ |17.08.2026
17.08.2026 ರಂದು ನಾಗರ ಪಂಚಮಿಯ ಪ್ರಯುಕ್ತ ಶ್ರೀ ದೇವಳದ ಚಿತ್ರಕೂಟ – ಪಂಚವಟಿ ಸಹಿತ ಕಂಬಳ ನಾಗ ಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ, ಕ್ಷೀರಾಭಿಷೇಕ, ನಾಗ ತಂಬಿಲ/ ನಾಗ ಪೂಜೆ ಸೇವೆಗಳು ಬೆಳಿಗ್ಗೆ 6.30 ರಿಂದ ಸಂಜೆ 5 ಘಂಟೆಯವರೆಗೆ ಜರಗಲಿದೆ. ಆಡಳಿತ ಮಂಡಳಿ
17.08.2026 ರಂದು ನಾಗರ ಪಂಚಮಿಯ ಪ್ರಯುಕ್ತ ಶ್ರೀ ದೇವಳದ ಚಿತ್ರಕೂಟ – ಪಂಚವಟಿ ಸಹಿತ ಕಂಬಳ ನಾಗ ಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ, ಕ್ಷೀರಾಭಿಷೇಕ, ನಾಗ ತಂಬಿಲ/ ನಾಗ ಪೂಜೆ ಸೇವೆಗಳು ಬೆಳಿಗ್ಗೆ 6.30 ರಿಂದ ಸಂಜೆ 5 ಘಂಟೆಯವರೆಗೆ ಜರಗಲಿದೆ. ಆಡಳಿತ ಮಂಡಳಿ
ದಿನಾಂಕ 17.08.2026 ಸೋಮವಾರ ಸಂಜೆ 5.00 ರಿಂದ 7.00 ರವರೆಗೆ ಸಿಂಹ ಸಂಕ್ರಮಣೋತ್ಸದ ಅಂಗವಾಗಿ ಶ್ರೀ ದೇವಳದ ಶಾರಧ್ವತ ಯಜ್ಞಾಂಗಣದಲ್ಲಿ ಛಾಂದಸ ಗಣೇಶ ಕೊಲೆಕಾಡಿ ವಿರಚಿತ ಸ್ತುತಿ ಪದ್ಯಗಳಿಂದಯಕ್ಷ ನಾದಾರ್ಚನೆ ಭಾಗವತರು – ಮನ್ವಿತ್ ಶೆಟ್ಟಿ ಇರಾ, ಲಕ್ಷ್ಮೀನಾರಾಯಣ ಹೊಳ್ಳ, ವಿಶ್ವಾಸ್ ಭಟ್ ಕರ್ಬೆಟ್ಟು ಮದ್ದಳೆ , ಚೆಂಡೆ – ಮಯೂರ ನಾಯ್ಗ ಮಾಡೂರು, ಸ್ಕಂದ ಕೊನ್ನಾರ್ಚಕ್ರ ತಾಳ – ಪೂರ್ಣೇಶ್ ಆಚಾರ್ಯ ನಿರೂಪಣೆ – ದೀವಿತ್.ಎಸ್.ಕೋಟ್ಯಾನ್
ಶ್ರೀ ದೇವಳದ ಪ್ರಾಕಾರದಲ್ಲಿ ನೆಲೆ ನಿಂತಿರುವ ಶ್ರೀ ಗೋಪಾಲಕೃಷ್ಣ ಪಾಂಡುರಂಗಸ್ವಾಮಿಯ ಪ್ರತಿಷ್ಠಾ ವರ್ಧಂತಿಯ ಸಂದರ್ಭದಲ್ಲಿ ಶ್ರೀ ದೇವಳದಿಂದ ನಿರ್ವಹಿಸಲ್ಪಡುವ ಸುಮಾರು ಒಂದು ನೂರಕ್ಕೂ ಹೆಚ್ಚು ಗೋವುಗಳನ್ನು ಪಾಲನೆ ಮಾಡಬಹುದಾದಂತಹ ನೂತನ ಸುಸಜ್ಜಿತ ಗೋಶಾಲೆ “ಶ್ರೀ ಜ್ಞಾನಶಕ್ತಿ ಗೋಕುಲ” ವನ್ನು ಉದ್ಘಾಟಿಸಲಾಯಿತು.
ಸಪ್ತ ಋಷಿಗಳಲ್ಲಿ ಶ್ರೇಷ್ಠರಾದ ವಸಿಷ್ಠರ ಅಂಶದಲ್ಲಿ ಸುಮಾರು 2000 ವರುಷದ ಹಿಂದೆ ಜನಿಸಿದವರು ಶ್ರೀ ಅಣ್ಣಪ್ಪಯ್ಯನವರು. ಷಟ್ ಶಾಸ್ತ್ರ ಕೋವಿದರಾದ ಇವರು ತನ್ನಯ ಜೀವಿತಾವಧಿಯಲ್ಲಿ ಅಖಂಡಭಾರತಾದ್ಯಂತ ಸಂಚರಿಸಿ ದೇಶದೆಲ್ಲೆಡೆ ನ್ಯಾಯದಾನದ ವ್ಯವಸ್ಥೆಯನ್ನು ಮಾಡಿ ಧರ್ಮ ನೆಲೆಯಾಗುವಂತೆ ಮಾಡಿದ ಯತಿಶ್ರೇಷ್ಠರು. ಪ್ರಾತಃಸ್ಮರಣೀಯರಾದ ಇವರು ಒಂದು ಕೈಯಲ್ಲಿ ಪಂಜು (ಅಜ್ಞಾನವೆಂಬ ಕತ್ತಲೆಯನ್ನು ನೀಗಿಸುವ ಸಂಕೇತ) ಇನ್ನೊಂದರಲ್ಲಿ ಉರುಳಿ (ಸಾಧನೆಯ ದ್ಯೋತಕ) ಹಿಡಿದು ಸತ್ಯದೇವತೆ, ಪಂಜುರ್ಲಿ, ಅಣ್ಣಪ್ಪ ಪಂಜುರ್ಲಿ, ಅಣ್ಣಪ್ಪ ಸ್ವಾಮಿ ಇತ್ಯಾದಿ ಹೆಸರುಗಳಲ್ಲಿ ದೈವವಾಗಿ ಪೂಜೆಗೊಳ್ಳುತ್ತಿದ್ದಾರೆ. ನಿತ್ಯ ಸತ್ಯೋಪಾಸಕರಾದ ಬ್ರಹ್ಮದೇವನ …
ಶ್ರೀಯುತ ದಿ.ಎರ್ಮಾಳು ರಾಮಚಂದ್ರ ರಾಯರು ಸುಮಾರು 4 ದಶಕಗಳ ಕಾಲ ಪಾವಂಜೆ ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯಲ್ಲಿದ್ದು ಎಲ್ಲಾ ಕೆಲಸಗಳಲ್ಲಿಯೂ ತ್ರಿಕರಣಪೂರ್ವಕವಾಗಿ ತೊಡಗಿಸಿಕೊಂಡಿದ್ದರು. ಶ್ರೀಯುತರು ಜೀವನದ ಕೊನೆಯತನಕವೂ ನಿತ್ಯ ನಿರಂತರವಾಗಿ ಶ್ರೀಸ್ವಾಮಿಯನ್ನು ಮನಸ್ಸಿನಲ್ಲಿಯೇ ಆರಾಧಿಸುತ್ತಿದ್ದರು. ಈ ಮೌನ ಪೂಜೆಯನ್ನು ವೇದಕೃಷಿಕ ಶ್ರೀ ಕೆ.ಎಸ್ ನಿತ್ಯಾನಂದರು ಪದಪುಂಜಗಳನ್ನು ಜೋಡಿಸಿ, ಭಾವವನ್ನು ಸಂಯೋಜಿಸಿ, ಭಕ್ತಿಯನ್ನು ಅಂತರ್ಗತಗೊಳಿಸಿ ಲಿಪಿಬದ್ಧಗೊಳಿಸಿದ್ದಾರೆ. ಈ ಸುಬ್ರಹ್ಮಣ್ಯ ಮಾನಸ ಪೂಜೆಯನ್ನು ಭಾಗವತ ಪಟ್ಲ ಸತೀಶ ಶೆಟ್ಟರು ಅತ್ಯಂತ ಸುಶ್ರಾವ್ಯವಾಗಿ ಹಾಡಿದ್ದಾರೆ. ಇದರ ಪ್ರಯೋಜನವನ್ನು ಆಸ್ತಿಕ ಜನರು …
ಸುಬ್ರಹ್ಮಣ್ಯ ಮಾನಸ ಪೂಜೆ – Subrahmanya Manasa Pooje Read More »