ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ನಾಗವೃಜ ಕ್ಷೇತ್ರ ಪಾವಂಜೆ

Shri Jnanashakthi Subrahmanyaswami Temple, Nagavruja Kshetra Pavanje

ಸ್ವರ್ಣಗೌರಿ ವ್ರತ ಹಾಗೂ ಗಣೇಶ ಚತುರ್ಥಿ | 14.09.2026

ದಿನಾಂಕ 14.09.2026 ಸೋಮವಾರದಂದು ಸ್ವರ್ಣಗೌರಿ ವ್ರತ ಹಾಗೂ ಗಣೇಶ ಚತುರ್ಥಿ ಯ ಪ್ರಯುಕ್ತ ಶ್ರೀ ದೇವಳದ ಶ್ರೀ ವರಪ್ರದಗಣಪತಿ ಸನ್ನಿಧಿಯಲ್ಲಿ ನಡೆಯುವ ವಿಶೇಷ ಸೇವೆಗಳ ವಿವರ

  1. ಸಿಂಧೂರ ಅರ್ಚನೆ
  2. ಪಂಚಾಮೃತಾಭಿಷೇಕ
  3. ಅಷ್ಟೋತ್ತರ ನಾಮಾರ್ಚನೆ
  4. ಮಂಗಳಾರತಿ
  5. ವರಪ್ರದಗಣಪತಿ ಹೋಮ

ತದನಂತರ ಸಂಜೆ 4ರಿಂದ ವಿಶೇಷ ಅಲಂಕಾರ, ನೈವೇದ್ಯ, ಅಷ್ಟಾವಧಾನ ಸೇವೆಗಳೊಂದಿಗೆ ಮಹಾಪೂಜೆ ಜರಗಿ ಪ್ರಸಾದ ವಿನಿಯೋಗ ನಡೆಯಲಿರುವುದು.

(ವರಪ್ರದಗಣಪತಿ ಹೋಮ ಸೇವೆಯು ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ಘಂಟೆಯವರೆಗೆ ನಡೆಯಲಿದ್ದು, ಭಕ್ತರಿಗೆ ವೈಯುಕ್ತಿಕ ಸೇವೆ ಸಲ್ಲಿಸಲು ಅವಕಾಶವಿರುತ್ತದೆ.)

ಸರ್ವರಿಗೂ ಆದರದ ಸ್ವಾಗತ.

ಆಡಳಿತ ಮಂಡಳಿ