ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ನಾಗವೃಜ ಕ್ಷೇತ್ರ ಪಾವಂಜೆ

Shri Jnanashakthi Subrahmanyaswami Temple, Nagavruja Kshetra Pavanje

ಪತ್ತನಾಜೆ – ಅಂಕುರಾರ್ಪಣೆ, ನಿರಂತರ ರುದ್ರಾಭಿಷೇಕ, ವರುಣ + ಪರ್ಜನ್ಯ ಆರಾಧನೆ. 24.05.2025

ದಿನಾಂಕ 24.05.2025ರಂದು ಪತ್ತನಾಜೆಯ ಪ್ರಯುಕ್ತ ಶ್ರೀ ದೇವಳದಲ್ಲಿ ಬೆಳಿಗ್ಗೆ ಅಂಕುರಾರ್ಪಣೆ, ಶ್ರೀ ಗೌತಮೇಶ್ವರ ಸನ್ನಿಧಿಯಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ರುದ್ರಾಭಿಷೇಕವು ಜರಗಲಿದೆ. ಹಾಗೆಯೇ, ಬೆಳಿಗ್ಗೆ 7 ಘಂಟೆಗೆ ವರುಣ+ಪರ್ಜನ್ಯ ಕಲಶ ಪ್ರತಿಷ್ಠೆ, ಸಂಜೆ 7ಕ್ಕೆ ಪುಷ್ಕರಿಣಿಯಲ್ಲಿ ವರುಣ+ಪರ್ಜನ್ಯ ಪೂಜೆ, ತದನಂತರ ಶ್ರೀದೇವರ ಸನ್ನಿಧಿಯಲ್ಲಿ ನಿತ್ಯಪೂಜೆ, ನಿತ್ಯರಂಗಪೂಜೆ ಸಂಪನ್ನಗೊಳ್ಳಲಿದೆ. ಸರ್ವರಿಗೂ ಆದರದ ಸ್ವಾಗತ

ಅಗೇಲು ಸೇವೆ / Agelu Seve – 08.05.2025

ಅಗೇಲು ಸೇವೆ ಈ ವಿಶಿಷ್ಟ ಅಗೇಲು ಸೇವೆಯೆಂಬ ಶೈವಾಗಮೋಕ್ತ ತಂತ್ರೋಕ್ತ ಪೂಜಾ ವಿಧಿಯು ಶ್ರೀ ದೇವಳದಲ್ಲಿ ಮೇ 8ರಂದು ಮಧ್ಯಾಹ್ನ 4 ಗಂಟೆಯಿಂದ ನಡೆಯಲಿದೆ. ನಿರಂತರವಾಗಿ 1000 ತಂತ್ರೋಕ್ತ ರೀತ್ಯಾ ರಂಗಪೂಜೆ ನಡೆದ ದೇವಾಲಯದಲ್ಲಿ ಈ ಅಗೇಲು ಸೇವೆಯೆಂಬ ವಿಶೇಷ ಪ್ರಕ್ರಿಯೆಯನ್ನು ನಡೆಸಲು ಅವಕಾಶವಿರುತ್ತದೆ. ಅಂತೆಯೇ ನಮ್ಮೀ ದೇವಾಲಯದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ದಿನದಿಂದ ಇಂದಿನವರೆಗೂ ನಿರಂತರವಾಗಿ ರಂಗಪೂಜೆ ನಡೆಯುತ್ತಿದ್ದು (7300ಕ್ಕೂ ಮೇಲ್ಪಟ್ಟು) ಪ್ರತಿ ವರ್ಷ ವೈಶಾಖ ಶುದ್ಧ ಏಕಾದಶಿಯಂದು ಅಗೇಲು ಸೇವೆಯನ್ನು ಸಲ್ಲಿಸಲಾಗುತ್ತಿದೆ. ಮಹಾರಂಗಪೂಜೆಯ ವಿಸ್ತೃತ ರೂಪವಾಗಿ …

ಅಗೇಲು ಸೇವೆ / Agelu Seve – 08.05.2025 Read More »

ವಾರ್ಷಿಕ ಮಹೋತ್ಸವ – 13 ಏಪ್ರಿಲ್ ರಿಂದ 19 ಏಪ್ರಿಲ್ 2025ರವರೆಗೆ

ಶ್ರೀ ದೇವಳದಲ್ಲಿ ವಾರ್ಷಿಕ ಮಹೋತ್ಸವವು ದಿನಾಂಕ 13.04.2025ರಂದು ಅಂಕುರಾರ್ಪಣೆಯಿಂದ ಮೊದಲ್ಗೊಂಡು, 14ರಂದು ಧ್ವಜಾರೋಹಣ, 18 ರಂದು ಮಹಾ ರಥೋತ್ಸವ, 19ರಂದು ಅವಭೃತ ಸ್ನಾನ, ಧ್ವಜಾವರೋಹಣ, ಅಣ್ಣಪ್ಪ ಸ್ವಾಮಿಗೆ ನರ್ತನ ಸೇವೆಯೊಂದಿಗೆ ಸಂಪನ್ನಗೊಳ್ಳಲಿದೆ.

ರಾಮ ನವಮಿ – 06.04.2025

ಶ್ರೀ ದೇವಳದ ಆಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ 06.04.2025ರಂದು ಶ್ರೀ ರಾಮ ನವಮಿಯ ಪ್ರಯುಕ್ತ ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಶ್ರೀ ರಾಮ ತಾರಕ ಮಂತ್ರ ಹೋಮ ಹಾಗೂಬೆಳಿಗ್ಗೆ 10 ಗಂಟೆಗೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಮಕ್ಕಳ ಯಕ್ಷ ಬಳಗ, ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ “ಯಕ್ಷಾರಾಧನೆ – ಹನುಮದ್ವಿಲಾಸ” ಜರಗಿತು. ನಿರ್ದೇಶನ : ಹರಿರಾಜ್ ಶೆಟ್ಟಿಗಾರ್ ಕಿನ್ನಿಗೋಳಿಹಿಮ್ಮೇಳ : ಮನ್ವಿತ್ ಶೆಟ್ಟಿ ಇರಾ, ಗುರುಪ್ರಸಾದ್ ಬೋಳಿಂಜಡ್ಕ, ಪ್ರಶಾಂತ್ ಶೆಟ್ಟಿ ವಗೆನಾಡು

ಶ್ರೀ ಜ್ಞಾನಶಕ್ತಿ ಗೋಕುಲ | ನೂತನ ಸುಸಜ್ಜಿತ ಗೋಶಾಲೆ – Shri Jnanashakthi Gokula | Newly built Goshaale

ಶ್ರೀ ದೇವಳದ ಪ್ರಾಕಾರದಲ್ಲಿ ನೆಲೆ ನಿಂತಿರುವ ಶ್ರೀ ಗೋಪಾಲಕೃಷ್ಣ ಪಾಂಡುರಂಗಸ್ವಾಮಿಯ ಪ್ರತಿಷ್ಠಾ ವರ್ಧಂತಿಯ ಸಂದರ್ಭದಲ್ಲಿ ಶ್ರೀ ದೇವಳದಿಂದ ನಿರ್ವಹಿಸಲ್ಪಡುವ ಸುಮಾರು ಒಂದು ನೂರಕ್ಕೂ ಹೆಚ್ಚು ಗೋವುಗಳನ್ನು ಪಾಲನೆ ಮಾಡಬಹುದಾದಂತಹ ನೂತನ ಸುಸಜ್ಜಿತ ಗೋಶಾಲೆ “ಶ್ರೀ ಜ್ಞಾನಶಕ್ತಿ ಗೋಕುಲ” ವನ್ನು ಉದ್ಘಾಟಿಸಲಾಯಿತು.

ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ ಪೂಜೆ – 02.03.2025

ದಿನಾಂಕ 02.03.2025ರಂದು ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ ಪೂಜೆಯು ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದ ಶಾರಧ್ವತ ಯಜ್ಞಾಂಗಣದಲ್ಲಿ ಸಂಪನ್ನಗೊಂಡಿತು.

ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸ್ಮರಣಾರ್ಥ ಆರಾಧನೋತ್ಸವ -14.01.2025

ದಿನಾಂಕ 14.01.2025ರಂದು ಶ್ರೀದೇವಳದಲ್ಲಿ “ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸ್ಮರಣಾರ್ಥ ಆರಾಧನೋತ್ಸವ” ಜರಗಲಿದೆ. ಸರ್ವರಿಗೂ ಆದರದ ಸ್ವಾಗತ#ಪಾವಂಜೆ#pavanje#sjsstemple#ಹರಿದಾಸ#haridasa#ಭಜನೆ#bhajan#classical#music#ಶಾಸ್ತ್ರೀಯ#ಸಂಗೀತ

ಚಂಪಾ ಷಷ್ಠಿ ಮಹೋತ್ಸವ – 05.12.2024 ರಿಂದ 07.12.2024ವರೆಗೆ

ಶ್ರೀ ದೇವಳದಲ್ಲಿ ಚಂಪಾ ಷಷ್ಠಿ ಮಹೋತ್ಸವವು 05.12.2024 ರಿಂದ 07.12.2024ವರೆಗೆ ಜರಗಲಿದೆ.ಸರ್ವರಿಗೂ ಆದರದ ಸ್ವಾಗತ. pavanjemela #ಪಾವಂಜೆ #Subrahmanya #sjsstemple #jnanashakthi #Yakshagana #pavanje #champa #shashti #mahotsava #annadaana #ಯಕ್ಷಗಾನ #ಜ್ಞಾನಶಕ್ತಿ #ಸುಬ್ರಹ್ಮಣ್ಯ #ಚಂಪಾ #ಷಷ್ಠಿ #ಮಹೋತ್ಸವ #ನಾಗಾರಾಧನೆ #ಅನ್ನದಾನ #ಕರಾವಳಿ #ಉತ್ಸವ #ರಥೋತ್ಸವ #ನಾಗವೃಜ