ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ನಾಗವೃಜ ಕ್ಷೇತ್ರ ಪಾವಂಜೆ

Shri Jnanashakthi Subrahmanyaswami Temple, Nagavruja Kshetra Pavanje

ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ ಪೂಜೆ – 02.03.2025

ದಿನಾಂಕ 02.03.2025ರಂದು ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ ಪೂಜೆಯು ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದ ಶಾರಧ್ವತ ಯಜ್ಞಾಂಗಣದಲ್ಲಿ ಸಂಪನ್ನಗೊಂಡಿತು.

ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸ್ಮರಣಾರ್ಥ ಆರಾಧನೋತ್ಸವ -14.01.2025

ದಿನಾಂಕ 14.01.2025ರಂದು ಶ್ರೀದೇವಳದಲ್ಲಿ “ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸ್ಮರಣಾರ್ಥ ಆರಾಧನೋತ್ಸವ” ಜರಗಲಿದೆ. ಸರ್ವರಿಗೂ ಆದರದ ಸ್ವಾಗತ#ಪಾವಂಜೆ#pavanje#sjsstemple#ಹರಿದಾಸ#haridasa#ಭಜನೆ#bhajan#classical#music#ಶಾಸ್ತ್ರೀಯ#ಸಂಗೀತ

ಚಂಪಾ ಷಷ್ಠಿ ಮಹೋತ್ಸವ – 05.12.2024 ರಿಂದ 07.12.2024ವರೆಗೆ

ಶ್ರೀ ದೇವಳದಲ್ಲಿ ಚಂಪಾ ಷಷ್ಠಿ ಮಹೋತ್ಸವವು 05.12.2024 ರಿಂದ 07.12.2024ವರೆಗೆ ಜರಗಲಿದೆ.ಸರ್ವರಿಗೂ ಆದರದ ಸ್ವಾಗತ. pavanjemela #ಪಾವಂಜೆ #Subrahmanya #sjsstemple #jnanashakthi #Yakshagana #pavanje #champa #shashti #mahotsava #annadaana #ಯಕ್ಷಗಾನ #ಜ್ಞಾನಶಕ್ತಿ #ಸುಬ್ರಹ್ಮಣ್ಯ #ಚಂಪಾ #ಷಷ್ಠಿ #ಮಹೋತ್ಸವ #ನಾಗಾರಾಧನೆ #ಅನ್ನದಾನ #ಕರಾವಳಿ #ಉತ್ಸವ #ರಥೋತ್ಸವ #ನಾಗವೃಜ

ಕಾರ್ತಿಕ ದೀಪೋತ್ಸವ – 02.11.2024 ರಿಂದ 04.12.2024ರ ವರೆಗೆ ಪ್ರತಿನಿತ್ಯ ಸಂಜೆ 6.30ರಿಂದ)

ಶ್ರೀ ದೇವಳದಲ್ಲಿ ಕಾರ್ತಿಕ ಮಾಸ ಪರ್ಯಂತ ಸಂಜೆ ನಿತ್ಯ ರಂಗಪೂಜೆಯ ಬಳಿಕ ನಡೆಯುವ “ಕಾರ್ತಿಕ ದೀಪೋತ್ಸವ”ದ ಸಂಕ್ಷಿಪ್ತ ವಿವರಣೆ. ದೇಹೋ ದೇವಾಲಯ ಪ್ರೋಕ್ತೋ ಜೀವೋ ಹಂಸ: ಸದಾಶಿವ: | ತ್ಯಜೇತ್ ಅಜ್ಞಾನ ನಿರ್ಮಾಲ್ಯಂ ಸೋಹಂ ಭಾವೇನ ಪೂಜಯೇತ್ | ಇದು ಆತ್ಮ ಪರಮಾತ್ಮ ಅನುಸಂಧಾನೋಪಾಯ, ಸಾಧಕರಿಗೂ, ವಿದ್ವಾಂಸರಿಗೂ, ಜ್ಞಾನಿಗಳಿಗೂ ಸಾಧ್ಯವಾದ ಸ್ವರೂಪ ವಿಧಾನ. ಆದರೆ ಸಾಮಾನ್ಯರಿಗೂ ಪರಮಾತ್ಮ ಸಾನಿಧ್ಯ ಬೇಡವೇ? ಕೈವಲ್ಯ ಪ್ರಾಪ್ತಿಯ ಪ್ರಯತ್ನವಾದರೂ ಬೇಡವೇ? ಪ್ರಾಪಂಚಿಕ ಜೀವನದ ತೊಳಲಾಟ, ಡೊಂಬರಾಟದಿಂದ ಮುಕ್ತಿ ಬೇಡವೇ? ಜೀವನದ ಹೋರಾಟದಲ್ಲಿ …

ಕಾರ್ತಿಕ ದೀಪೋತ್ಸವ – 02.11.2024 ರಿಂದ 04.12.2024ರ ವರೆಗೆ ಪ್ರತಿನಿತ್ಯ ಸಂಜೆ 6.30ರಿಂದ) Read More »

ಪಾವಂಜೆ ಮೇಳದ ಐದನೇ ವರುಷದ ಯಕ್ಷಗಾನ ಯಾನಾರಂಭ – 13.11.2024

ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ13.11.2024ಮೇಳದ ಐದನೇ ವರುಷದ ಯಕ್ಷಗಾನ ಯಾನಾರಂಭ#pavanjemela #sangeeta #mantra #veda #jagadguru #patla #patlasathishshetty #praphullachandra #ಪಟ್ಲ #ಪ್ರಫುಲ್ಲಚಂದ್ರ #jnanashakthi #yakshagana #devimahatme #sathishshetty #ganavaibhava #ಯಕ್ಷಗಾನ #ಪಾವಂಜೆ #ಮೇಳ #ಸುಬ್ರಹ್ಮಣ್ಯ #ನಾಗವೃಜ #ಕರಾವಳಿ #ಜ್ಞಾನಶಕ್ತಿ #ಯಾನಾರಂಭ

ಶ್ರೀ ಅಣ್ಣಪ್ಪಯ್ಯ ಚರಿತ್ರೆ

ಸಪ್ತ ಋಷಿಗಳಲ್ಲಿ ಶ್ರೇಷ್ಠರಾದ ವಸಿಷ್ಠರ ಅಂಶದಲ್ಲಿ ಸುಮಾರು 2000 ವರುಷದ ಹಿಂದೆ ಜನಿಸಿದವರು ಶ್ರೀ ಅಣ್ಣಪ್ಪಯ್ಯನವರು. ಷಟ್ ಶಾಸ್ತ್ರ ಕೋವಿದರಾದ ಇವರು ತನ್ನಯ ಜೀವಿತಾವಧಿಯಲ್ಲಿ ಅಖಂಡಭಾರತಾದ್ಯಂತ ಸಂಚರಿಸಿ ದೇಶದೆಲ್ಲೆಡೆ ನ್ಯಾಯದಾನದ ವ್ಯವಸ್ಥೆಯನ್ನು ಮಾಡಿ ಧರ್ಮ ನೆಲೆಯಾಗುವಂತೆ ಮಾಡಿದ ಯತಿಶ್ರೇಷ್ಠರು. ಪ್ರಾತಃಸ್ಮರಣೀಯರಾದ ಇವರು ಒಂದು ಕೈಯಲ್ಲಿ ಪಂಜು (ಅಜ್ಞಾನವೆಂಬ ಕತ್ತಲೆಯನ್ನು ನೀಗಿಸುವ ಸಂಕೇತ) ಇನ್ನೊಂದರಲ್ಲಿ ಉರುಳಿ (ಸಾಧನೆಯ ದ್ಯೋತಕ) ಹಿಡಿದು ಸತ್ಯದೇವತೆ, ಪಂಜುರ್ಲಿ, ಅಣ್ಣಪ್ಪ ಪಂಜುರ್ಲಿ, ಅಣ್ಣಪ್ಪ ಸ್ವಾಮಿ ಇತ್ಯಾದಿ ಹೆಸರುಗಳಲ್ಲಿ ದೈವವಾಗಿ ಪೂಜೆಗೊಳ್ಳುತ್ತಿದ್ದಾರೆ. ನಿತ್ಯ ಸತ್ಯೋಪಾಸಕರಾದ ಬ್ರಹ್ಮದೇವನ …

ಶ್ರೀ ಅಣ್ಣಪ್ಪಯ್ಯ ಚರಿತ್ರೆ Read More »

ಸುಬ್ರಹ್ಮಣ್ಯ ಮಾನಸ ಪೂಜೆ – Subrahmanya Manasa Pooje

ಶ್ರೀಯುತ ದಿ.ಎರ್ಮಾಳು ರಾಮಚಂದ್ರ ರಾಯರು ಸುಮಾರು 4 ದಶಕಗಳ ಕಾಲ ಪಾವಂಜೆ ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯಲ್ಲಿದ್ದು ಎಲ್ಲಾ ಕೆಲಸಗಳಲ್ಲಿಯೂ ತ್ರಿಕರಣಪೂರ್ವಕವಾಗಿ ತೊಡಗಿಸಿಕೊಂಡಿದ್ದರು. ಶ್ರೀಯುತರು ಜೀವನದ ಕೊನೆಯತನಕವೂ ನಿತ್ಯ ನಿರಂತರವಾಗಿ ಶ್ರೀಸ್ವಾಮಿಯನ್ನು ಮನಸ್ಸಿನಲ್ಲಿಯೇ ಆರಾಧಿಸುತ್ತಿದ್ದರು. ಈ ಮೌನ ಪೂಜೆಯನ್ನು ವೇದಕೃಷಿಕ ಶ್ರೀ ಕೆ.ಎಸ್ ನಿತ್ಯಾನಂದರು ಪದಪುಂಜಗಳನ್ನು ಜೋಡಿಸಿ, ಭಾವವನ್ನು ಸಂಯೋಜಿಸಿ, ಭಕ್ತಿಯನ್ನು ಅಂತರ್ಗತಗೊಳಿಸಿ ಲಿಪಿಬದ್ಧಗೊಳಿಸಿದ್ದಾರೆ. ಈ ಸುಬ್ರಹ್ಮಣ್ಯ ಮಾನಸ ಪೂಜೆಯನ್ನು ಭಾಗವತ ಪಟ್ಲ ಸತೀಶ ಶೆಟ್ಟರು ಅತ್ಯಂತ ಸುಶ್ರಾವ್ಯವಾಗಿ ಹಾಡಿದ್ದಾರೆ. ಇದರ ಪ್ರಯೋಜನವನ್ನು ಆಸ್ತಿಕ ಜನರು …

ಸುಬ್ರಹ್ಮಣ್ಯ ಮಾನಸ ಪೂಜೆ – Subrahmanya Manasa Pooje Read More »

ಶ್ರೀ ಗೋಪಾಲಕೃಷ್ಣ ಪಾಂಡುರಂಗ ದೇವರ ಸನ್ನಿಧಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ – 26.08.2024

ಶ್ರೀ ದೇವಳದ ಪ್ರಾಕಾರದಲ್ಲಿ ನೆಲೆ ನಿಂತಿರುವ ಶ್ರೀ ಗೋಪಾಲಕೃಷ್ಣ ಪಾಂಡುರಂಗ ದೇವರ ಸನ್ನಿಧಿಯಲ್ಲಿ 26.08.2024ರಂದು ಶ್ರೀಕೃಷ್ಣ ಜನ್ಮಾಷ್ಟಮಿಯು ವಿವಿಧ ಪ್ರಾಕಾರದ ಆರಾಧನೆಗಳಿಂದ ಸಂಪನ್ನಗೊಳ್ಳಲಿದೆ.